Friday, April 27, 2012

ತೇಜಸ್ವಿ ಎಲ್ಲರಂತೆ ಬದುಕಿದ ಸಾಮಾನ್ಯ ಮನುಷ್ಯ

ಕಳೆದ ವಾರ ಬೆಂಗಳುರಿಂದ ಬೆಳ್ತಂಗಡಿ ಪಯಣ ಹೊರಟಿತ್ತು, ಮುಂಜಾನೆ 4.30 ಸಮಯ ಕೊಟ್ಟಿಗೆಹಾರ ಬಸ್ ಸ್ಟಾಪ್ ಅಲ್ಲಿ ಕಾರ್ ನಿಲ್ಲಿಸಿ ಬಸ್ ಸ್ಟಾಪ್ ಎದ್ದುರು ಇದ್ದ ಒಂದು ಟೀ ಅಂಗಡಿಯಲ್ಲಿ ಕಾಫಿ ಹಿಗುತ್ತ ನೀರು ದೋಸೆ ತಿನ್ನುತ್ತ ನಿಂತ್ತೆವು.. ಕೊಟ್ಟಿಗೆಹರದಲ್ಲಿರುವ ತೇಜಸ್ವಿ ಸಂಶೋಧನಾ ಕೇಂದ್ರ ಒಮ್ಮೆ ನೆನಪಿಗೆ ಬಂತ್ತು, ಈ ಕುರಿತ್ತು ಅಂಗಡಿ ಅವರ ಬಳಿ ಮಾತನಾಡುತ್ತಿದೆ ಇದಕ್ಕಿದ ಹಾಗೆ ಅವ 
"ಅಯ್ಯೋ ಬಿಡಿ ಸರ್, ತೇಜಸ್ವಿ ಅವರು ಏನ್ ಮಾಡಿದ್ರು?? ಅಂತ ಮಹಾನ್ ಕೆಲಸ ಅದ್ರು ಏನ್ ಮಾಡಿದ್ರು.. ನಮ್ಮಂತೋರಿಗೆ ಉಪಯೋಗ ಅಗ್ಲಿಕಿಲ್ಲ , ಅವರು ಊರಿಗೆ ಅಂತ ಏನು ಮಾಡಲಿಲ್ಲ " ಎಂದು ತೇಜಸ್ವಿ ಅವರ ಬಗ್ಗೆ ಸ್ವಾರ್ಥದ ನುಡಿ ನುಡಿದ..

ನಿಂತಲ್ಲೇ ದಿಗ್ಭ್ರಮೆಯಾಯಿತು ಜೊತೆಯಲ್ಲಿದ ನನ್ನ ಗೆಳೆಯ ವಿನೋದ್ ಸ್ವಲ್ಪ ಕೋಪ ಬಂದು " ಅಲ್ಲ ಸ್ವಾಮಿ, ತೇಜಸ್ವಿ ನಿಮಗೆ ಏನ್ ಮಾಡಬೇಕಿತ್ತು, ಅವರ ಬೂಕ್ಸ್ ಇಂದ ಎಷ್ಟೋ ಜನರಿಗೆ Inspiration ಆಯ್ತು ಎಲ್ಲರ ಹಾಗೆ ಸಾಮಾನ್ಯವಾಗಿ ಬದುಕಿ ಹೋದರು " ಎಂದು ಹೇಳಿದ...

ಅದಕ್ಕೆ ಅಂಗಡಿ ಅವ " ಪುಸ್ತಕ ಅದು ಇದು ಎಲ್ಲ ನಿಮ್ಮಂತೋರಿಗೆ ಸರಿ ನಮ್ಮಿಗ್ ಏನ್ ಉಪಯೋಗ ಆಯ್ತು" ಎಂದು ಮತ್ತೆ ತಾರಕ ಮಾಡಿದ್ದ

ವಿನೋದ್ ಕರೆದುಕೊಂಡು ಅಲ್ಲಿಂದ ಬಂದ ಕೆಲೆಸ ಹಿಡಿದು ಹೊರೆಟೆವು.. ತೇಜಸ್ವಿ ಅಂತಹ ಮಹಾನ್ ಶಕ್ತಿಯ ಬಗ್ಗೆ ಅರಿವು ಮೂಡಿಸುವ ಸಮಯವಾಗಲಿ ಯೋಚನೆ ಅಗಲಿ ಮಾಡುವ ಪ್ರಯತ್ನ ಮಾಡಲಿಲ್ಲ... ತೇಜಸ್ವಿ ಎಲ್ಲರಂತೆ ಬದುಕಿದ ಮನುಷ್ಯ ಜೀವಿ , ಮೂಡಿಗೆರೆಯ ಯಾವುದೊ ಒಂದು ಪುಟ್ಟ ಜಾಗದಲ್ಲಿ ತೋಟಗಾರಿಕೆ ಮಾಡಿಕೊಂಡು ತಮ್ಮ ಸುತ್ತಲಿನ ಜೀವ ಸಂಕುಲಗಳ ಬಗ್ಗೆ ಯೋಚಿಸುತ್ತ, ಅಲ್ಲಿ ಅವರು ಕಂಡ ಪುಟ್ಟ ಪ್ರಪಂಚದ ಜೊತೆ ಬೇರೆತ್ತು ಅರಿತ್ತ ಅನುಭವಗಳನು ಅಲಿಂದಲೇ ಬರಹದ ಮೂಲಕ ಪ್ರಪಂಚಕೆ ಸಮರ್ಪಿಸಿದರು.. ಕೆಲವರು ಇದನು inspiration ಆಗಿ ಕಂಡುಕೊಂಡರು, ಇನ್ನು ಕೆಲವರು ಇವರು ಮಹಾನ್ ವ್ಯಕ್ತಿ ಎಂದು ಕರೆದರೂ.. ಅವರವರ ಅನುಕೂಲಕ್ಕೆ , ಅವಾಂತರಕ್ಕೆ ತಕ್ಕ ಹಾಗೆ ಕರೆಯಲು ಪ್ರಾರಂಭಿಸಿದರು...

ಇದೆಲ್ಲ ವಿಚಾರಗಳು ಏನೇ ಇರಲ್ಲಿ ತೇಜಸ್ವಿ ಅವರು ದುಡ್ಡಿನ ಹಿಂದೆ ಹೋದವರಂತು ಅಲ್ಲ , ಯಾವ ಮಂತ್ರಿ ಪದವಿ ಅಥವಾ ಪಕ್ಷಗಳ ಕಟ್ಟಿದವರು ಅಲ್ಲ.. DVG ಅವರ "ಎಲ್ಲರೊಳಗೊಂದಾಗು ಮಂಕುತಿಮ್ಮ" ಎಂದು ತಮ್ಮ ಸುತ್ತ ಮುತ್ತಲಿನ ಪರಿಸರದ ಜೊತೆ ಬೇರೆತ್ತು ಅರಿತ್ತು ಬದುಕಿದವರು ಎಂಬ ವಿಚಾರ ತೇಜಸ್ವಿ ಸುತ್ತ ಬದುಕಿದ ವ್ಯಕ್ತಿಗಳಿಗೆ ಅದ್ಯಕ್ಕೆ ತಿಳಿಯಲಿಲ್ಲ?? .. ಇಂತಹ  ಮನುಷ್ಯ ಅಂಗಡಿ ಅವರಿಗೆ ಅಥವಾ ಊರಿನ ಯಾವುದೇ ಜನರಿಗಾಗಲೀ ಏನು ಮಾಡಬೇಕಿತ್ತು, ಅಂಗಡಿ ಅವನದು ಮೂರ್ಖ ಪ್ರಶ್ನೆಯೇ ಅಥವಾ ಸ್ವಾಭಾವಿಕ ಮನುಷ್ಯರ ಗುಣವೋ ಅರಿಯಲಿಲ್ಲ, ತೇಜಸ್ವಿ ಸುತ್ತ ಇಂತಹ ಅನೇಕರು ಇದರು ಇವುಗಳ ಕುರಿತ್ತು ಯಾವುದನು ತಲೆ ಕೆಡಿಸಿಕೊಲ್ಲದೆ ಅವರ ಜೊತೆ ಬೆರೆತು ಪ್ರಪಂಚ ನೋಡಿದವರು ಅವರು, ತೇಜಸ್ವಿ ಒಂದು ಮಹಾನ್ ತೆಜಸು "ಹಿತ್ತಲ ಗಿಡ ಮದ್ದಲ್ಲ" ಎಂಬ ಮಾತು ಅಲ್ಲಿನ ಅನೇಕ ಜನರಿಗೆ ತಿಳಿದ ಹಾಗೆ ಇರಲಿಲ್ಲ.. :) 

4 comments:

  1. ಸೂರ್ಯ ಸೂಪರ್...... ಆತ ಕೇಳಿದ್ದರಲ್ಲೂ ನಿಜ ಇದೇ ತಾನೆ...... ತೇಜಸ್ವಿ ಓದುಗನಿಗೆ ರಸದೌತಣ ಉಣಬಡಿಸುವ ಮಹಾನ್ ಕೃತಿ....

    ReplyDelete
  2. Entha nija maraya! Yak tejaswi avarige madbekittu avarenu samaja sevaka alval avaru common man ashte

    ReplyDelete
  3. Lo Avi... Yaaru Tejasvi avar thara jeevna maadtharo, avaru eethara janarige prayojana aagalla, yaakandre avarinda ee janru yeenu kaliyalla. Ide nam samajada dustithi... Yenu maadakke aagalla... At least namanthoru avara book odi kalibeku ashte...

    ReplyDelete