Friday, August 1, 2014

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ

ನಾಗರ ಪಂಚಮಿ ಬಂತೆಂದರೆ ಜನರು ಹಾಲಿನ ಪ್ಯಾಕೆಟ್, ಬಟ್ಟಲು, ಚೊಂಬು ಲೊಟ್ಟ ಸಿಕ್ಕಿದ ಪಾತ್ರೆಗಳಲ್ಲಿ ಹಾಲು ಕೊಂಡೊಯ್ದು ಹಾವಿನ ಹುತ್ತಕೆ ಹಾಲೆರೆಯುವರು. ಇನ್ನು ಕೆಲವರು ಹಾವಾಡಿಗನಿಂದ ಹಾವು ತರಿಸಿ ಪಾಪದ ಹಾವಿಗೆ ಹಾಲೆರೆಯುವರು, ಇದು ನಮ್ಮ ಭಾರತೀಯ ಸಂಸ್ಕೃತಿ. ನಮ್ಮ ಗೊಡ್ಡು ಸಂಪ್ರದಾಯದಿಂದ ಹಾವುಗಳ ಬದುಕುವದು ಕಷ್ಟವಾಗಿದೆ, ಮನುಷ್ಯನ ಮುರ್ಖತನಗಳು ಜೀವರಾಶಿಗಳ ಬದುಕುವ ಹಕ್ಕು ಕಿತ್ತುಕೊಂಡಿದೆ. ನೀವು ಹುತ್ತದ ಮೇಲೆ ಸುರಿಯುವ ಹಾಲಿನಿಂದ ಆಗುವ ಪರಿಣಾಮದ ಅರಿವು ನಿಮಗೆ ತಿಳಿದಿಲ್ಲ. ಹಾವು ಹಾಲು ಕುಡಿಯುತ್ತದೆ ಎಂಬ ತಪ್ಪು ಕಲ್ಪನೆಗಳು ನಮ್ಮ ಜನರ ಮಂಕು ಹಿಡಿದ ಬುದ್ಧಿಗೆ ಇನ್ನು ಅರಿವಾಗಿಲ್ಲ.

ನಿಮ್ಮ ಮನೆಗಳಲ್ಲಿ ಹಾವು ಬಂದರೆ ಹೊಡೆದು ಸಾಯುಸಿವಿರಿ ಅದೇ ದೇವಸ್ತಾನದಲ್ಲಿ ಕಲ್ಲು ನಾಗರಕ್ಕೆ ಹಾಲೆರೆಯುವಿರಿ. ಇದೆಂತ ಸಿದ್ದಾಂತ? ನಿಮ್ಮ ಪ್ರಕಾರ ಮನೆ ಮಕ್ಕಳು ನೀವು ಸುರಕ್ಷಿತವಾಗಿರಬೇಕು ಅಲವೇ? ಆ ಪ್ರಾಣಿಗಳು ಸತ್ತರು ಬಿಟ್ಟರು ನಿಮ್ಮಗೆ ಅದರ ಚಿಂತೆಯಾಕೆ!!

ಗೆಳೆಯರೇ ನೀವು ಹಾಲೆರೆವ ಹುತ್ತಗಳ ಮೇಲೆ ಇರುವೆ , ಗೆದ್ದಲು ಹುಳ್ಳು, ಮುಂತಾದ ಕ್ರಿಮಿ ಕೀಟಗಳ ದಾಳಿಗೆ ಹಾವುಗಳು ಬಲಿಯಾಗುತವೆ. ನೀವು ತರುವ ಹಾಲು ಬಡವರಿಗೆ ಹಸಿದವರಿಗೆ ಕೊಡಿ, ಹಾಲು ಕುಡಿಯದ ಹಾವಿನ ಮೇಲೆ ಸುರಿದು ಹಿಂಸಿಸ ಬೇಡಿ. ಹಾವಿಗೆ ಹಾಲು ವಿಶಾಕರಿ, ಆಹಾರವಲ್ಲ! ಪ್ರಾಣಿ ಪಕ್ಷಿಗಳನು ಬದುಕಲು ಬಿಡಿ, ನಮ್ಮ ಹಾಗೆ ಬದುಕುವ ಹಕ್ಕು ಅವುಗಳಿಗಿದೆ. ಪ್ರಾಣಿಗಳನು ಪ್ರೀತಿಸಿ ಬೇಡಿ ರಕ್ಷಿಸ ಬೇಡಿ ಅವುಗಳನು ನಿಮ್ಮಂತೆಯೇ ಗೌರವಿಸಿ ಬದುಕಲು ಬಿಡಿ. ಇದರ ಬಗ್ಗೆ ಇನ್ನು ಹಲವರಿಗೆ ತಿಳಿ ಹೇಳಿ ಹುತ್ತದ ಮೇಲೆ ಹಾವಿನ ಮೇಲೆ ಹಾಲೆರೆಯುವುದ ನಿಲಿಸಿ.